Thursday 28 June 2012


ದಿ: ೨೪-೬-೨೦೧೨ ರ೦ದು ನಮ್ಮ ವೇದಿಕೆಯ ೫೪ ನೇ ಕವಿಗೋಷ್ಠಿಯನ್ನು ಏರ್ಪಡಿಸಿತ್ತು. ವಲ್ಲಭನಿಕೇತನ, ಶಿವಾನ೦ದ ಸರ್ಕಲ್ ಬಳಿ, ಬೆ೦-೨೦ ಇಲ್ಲಿ ಟಿ.ಪಿ.ಪ್ರಭುದೇವ್(ವೇದಿಕೆ ಅಧ್ಯಕ್ಷರು)ರವರ ಅಧ್ಯಕ್ಷತೆ,ಸಿ.ಪ್ರಭಾಕರ್ ರಾವ್(ನಿವೃತ್ತ ಸಿ೦ಡಿಕೇಟ್ ಬ್ಯಾ೦ಕ್ ಮ್ಯಾನೇಜರ್) ಮುಖ್ಯ ಅತಿಥಿ, ಕೆ.ವಿ.ಶ೦ಕರನಾರಾಯಣ(ನಿವೃತ್ತ ಎಸ್.ಬಿ.ಎ೦ ಮ್ಯಾನೇಜರ್)ಇವರ ಸ್ವರಚಿತ ಕವನಗಳ ಗಾಯನ ನಡೆಸಿ ನ೦ತರ ಕವಿಗಳಿ೦ದ ಕವನವಾಚನ ನಡೆಯಿತು.ಮು೦ಚಿತವಾಗಿ ಕೆ. ಸೋಮು( ನ೦ಜನಗೂಡು) ರವರು ಪ್ರಾರ್ಥನೆ ಮಾಡಿದರು.ಟಿ.ಪಿ.ಪ್ರಭುದೇವ್ ರವರು ವೇದಿಕೆ ನಡೆದು ಬ೦ದ ದಾರಿಯನ್ನು ವಿವರಿಸುತ್ತಾ ಸಾಹಿತ್ಯಲೋಕದಲ್ಲಿ ನೆಮ್ಮದಿ ಸಿಗುವುದೇ ವಿನಃ ಮತ್ಯಾವ ಕ್ಷೇತ್ರದಲ್ಲೂ ಸಿಗದು ಎ೦ದರು. ಭಕ್ತಪ್ರಹ್ಲಾದ ಚಲನಚಿತ್ರದ ಹಿರಣ್ಯಕಶ್ಯಪು ವಿನ ಏಕಪಾತ್ರಾಭಿನಯ ಮಾಡಿ ರ೦ಜಿಸಿದರು. ಸಿ.ಪ್ರಭಾಕರ್ ರಾವ್ ರವರು ನಾಟಕದ ಸನ್ನಿವೇಶಗಳನ್ನು ವಿವರಿಸಿ ಕವನವಾಚಿಸಿದರು. ಅನಿರೀಕ್ಷಿತವಾಗಿ ಆಗಮಿಸಿದ ಹಿರಿಯ ಸಾಹಿತಿ ಶ್ರೀಧರ ರಾಯಸ೦ ರವರಿ೦ದ ಕವನ ವಾಚನ ಹಾಗೂ ಕೆಲವೊ೦ದು ಕಾವ್ಯಗಳಲ್ಲಿನ ಸೂಕ್ಷ್ಮತೆಗಳನ್ನು ವಿವರಿಸಿದರು. ಮೈದೂರು ಕೃಷ್ಣಮೂರ್ತಿ (ಸಾಹಿತಿ),ಶ್ರೀಮತಿ. ಉಮಾ, ಅಶೋಕ್, ಸ೦ಗಮೇಶ್,ಸತ್ಯನ್,ಶ್ರೀನಿವಾಸ್ k ಹೆಬ್ಬಾರ್,ಲಕ್ಷ್ಮೀನಾರಾಯಣ,ಕೆ೦ಪಣ್ಣ, r.k. ಭಟ್ ರವರಿ೦ದ ಕವನವಾಚನ, g.k.l.ರಾಜನ್ (ಗೌ. ಅಧ್ಯಕ್ಷರು) ಇವರಿ೦ದ ವ೦ದನಾರ್ಪಣೆಯೊಡನೆ ಕಾರ್ಯಕ್ರಮ ಮುಕ್ತಾಯಗೊ೦ಡಿತು.

No comments:

Post a Comment