Tuesday 29 July 2014

80 ನೇ ಕವಿಗೋಷ್ಠಿ

ಸುನ೦ದಾ ಸಾಹಿತ್ಯ ವೇದಿಕೆ

ದಾಸರಹಳ್ಳಿ

ಬೆ೦ಗಳೂರು-560024


     ದಿನಾ೦ಕ:27-7-2014 ರಂದು ಬಾನುವಾರ,ಬೆಳಿಗ್ಗೆ: 10.30ಕ್ಕೆ  ವಲ್ಲಭನಿಕೇತನ,ಶಿವಾನ೦ದ ಸರ್ಕಲ್ ಹತ್ತಿರ,ಬೆ೦ಗಳೂರು-20 ಇಲ್ಲಿ 80 ನೇ ಕವಿಗೋಷ್ಠಿ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಈ ಕಾರ್ಯಕ್ರಮದಲ್ಲಿ ಪ್ರಕಾಶ್ ಎಸ್ ಶಿಲ್ಪಿ ಇವರಿಂದ ಕೊಳಲುವಾದನ ಸಾಹಿತ್ಯಸಕ್ತರನ್ನು ಮನರಂಜಿಸಿತು. ನಂತರ  ಕೃಷ್ಣ ದೇವಾಂಗಮಠ್ ಇವರಿಂದ ಕನ್ನಡ ಗೀತೆಗಳ ಗೀತಗಾಯನ ನಡೆಯಿತು. ಬಹಳ ಹೃದಯಂಗಮವಾಗಿ ಹಾಡಿ ಸಭಿಕರ ಮನಗೆದ್ದರು. ನಂತರ ಸುಮಾರು 20 ಕವಿಗಳು ಹಾಜರಿದ್ದರು. ಅವರಲ್ಲಿ ಕೋಳಾಲಪ್ಪ,ವೆಂಕಟರಾಮ್ ಭಾರತಿ,ಸುಮನ್ ರಾವ್,ಪ್ರಸಾದ್,ರಮ್ಯ,ಬನ್ನಪ್ಪ,ಉಮೇಶ್,ಜಿ.ಕೆ.ಎಲ್.ರಾಜನ್,ರವಿರಾಜ್,ಎಸ್.ಸಿ.ರಂಗನಾಥ್,ರಾಧಾತನಯ,ಆರ್.ಕೆ.ಭಟ್,ಮತ್ತಿತರರು ಸ್ವರಚಿತ ಕವನಗಳನ್ನು ವಾಚಿಸಿದರು. ನಂತರ ಮುಖ್ಯ ಅತಿಥಿಗಳಾಗಿದ್ದ ಶ್ರೀ. ಹುಲಿವಾನ್ ನರಸಿಂಹಸ್ವಾಮಿಯವರು ಕಾವ್ಯ,ಗಾಯನ ಕುರಿತು ವಿಮರ್ಶಿಸುತ್ತಾ ಕಾವ್ಯದಲ್ಲಿ ವಾಸ್ತವತೆ,ಲಯ,ಪ್ರಾಸಗಳಿಗೆ ಇತ್ತು ನೀಡಿ ಸಾಮಾಜಿಕ ಕಳಕಳಿ ಇರಬೇಕೆಂದು ಅಭಿಪ್ರಾಯಿಸಿದರು. ನಂತರ ಅಧ್ಯಕ್ಷತೆ ವಹಿಸಿದ್ದ ಶ್ರೀ.ಟಿ.ಪಿ.ಪ್ರಭುದೇವ್ ಇವರು ಶ್ರಾವಣಮಾಸದಲ್ಲಿ ಕವಿಹೃದಯಗಳಲ್ಲಿ ಕಾವ್ಯದ ಮಳೆ ಮುಂಗಾರಿನ೦ತೆ ಸಹೃದಯ ಸಾಹಿತ್ಯಾಸಕ್ತರ ಕವಿಮನಗಳನ್ನು ತಣಿಸಿದವು. ಯುವಕರ ಕವನಗಳಲ್ಲಿ ಸಾಮಾಜಿಕ ಬದ್ದತೆ,ಯುವಶಕ್ತಿಯ ಮುಂದಿರುವ ಸಮಸ್ಯೆಗಳನ್ನು ಸೂಕ್ಷ್ಮವಾಗಿ ವಿವರಿಸುತ್ತಾ ಸಾಮಾಜಿಕ ಪಿಡುಗಾಗಿ ಹಬ್ಬುತ್ತಿರುವ ಅನ್ಯಾಯ,ಅತ್ಯಾಚಾರಗಳು ತಡೆಯುವಲ್ಲಿ ಯುವಕರು ಸುಸಂಸ್ಕೃತರಾಗಬೇಕೆಂದರು. ಈ ಕಾರ್ಯಕ್ರಮವನ್ನು ವೇದಿಕೆಯ ಸಂಸ್ಥಾಪಕಿ ಶ್ರೀಮತಿ.ಬಿ.ಎನ್.ಸುನಂದಾ ರವರು ಅಚ್ಚುಕಟ್ಟಾಗಿ ನಿರೂಪಿಸಿದರು.

. ಮಾನ್ಯರೇ, ಈ ಕಾರ್ಯಕ್ರಮದ ವರದಿಯನ್ನು ಪ್ರಕಟಿಸಿ ಪ್ರೋತ್ಸಾಹಿಸಲು ವಿನಂತಿಸುತ್ತೇನೆ.ಜೊತೆಗೆ ಕಾರ್ಯಕ್ರಮದ ಫೋಟೋವನ್ನು ಲಗತ್ತಿಸಿದ್ದೇನೆ. ವಂದನೆಗಳೊಡನೆ,

                                                                                                                   ಟಿ.ಪಿ.ಪ್ರಭುದೇವ್
                                                                       ಅಧ್ಯಕ್ಷರು,ಸುನಂದಾ ಸಾಹಿತ್ಯ ವೇದಿಕೆ


No comments:

Post a Comment