Friday 1 November 2013

ಹೇಳು ಕನ್ನಡಮಾತೆ ನೀನೇಕೆ ಅಳುತಿರುವೆ

ಹೇಳು ಕನ್ನಡಮಾತೆ ನೀನೇಕೆ ಅಳುತಿರುವೆ

ಹೇಳು ಕನ್ನಡಮಾತೆ ನೀನೇಕೆ ಅಳುತಿರುವೆ
ಅಲ್ಲಿ ನೋಡಿದರೆ ತಮಿಳರು,ಇಲ್ಲಿ ನೋಡಿದರೆ ತೆಲುಗರು
ಆಚೆ ನೋಡಿದರೆ ಮರಾಠರು.ಈಚೆ ನೋಡಿದರೆ ಕೇರಳಿಗರು
ಎಲ್ಲಿ ನೋಡಿದರು ಅನ್ಯ ಭಾಷಿಕರ ಹಾವಳೀ ಮೇರೆ ಮೀರಿದೆ,ಮೇರೆ ಮೀರಿದೆ!!
ಹೆಜ್ಜೆ ಹೆಜ್ಜೆಗೂ ಗಲಭೆ ಮುಷ್ಕರ ಗಡೀ ಉದ್ದಕೂ ಅನ್ಯರಾಜ್ಯದವರ ವಲಸೆ
ಅಬಲೆ ಸ್ತ್ರೀಯರ ಆಕ್ರ೦ದನ ಮಿತಿ ಮೀರಿದೆ-ಅತೀಯಾಗಿದೆ
ಸಿರಿಗನ್ನಡ೦ ಗೆಲ್ಗೇ!! ಸಿರಿಗನ್ನಡ೦ ಬಾಳ್ಗೇ!! ಕನ್ನಡಿಗರ ಧ್ಯೇಯವಾಗಿದೆ
ಕನ್ನಡಿಗರ ಮ೦ತ್ರವಾಗಿದೆ!!ಹೇಳು!!
ಜಾತಿ ವಿಜಾತಿಯ ಕೂಗು ಕೇಳಲು ಅಸಹ್ಯವಾಗಿದೆ
ನಾನು ಶೈವನು,ನಾನು ವೈಷ್ಣವ,ನಾನು ಕುರುಬನು,ನಾನು ಜೈನನು
ನಾನು ಪಾದ್ರಿಯು,ನಾನು ಮುಸ್ಲಿ೦ ಎ೦ಬ ಭಾವನೆ ಬೆಳೆದಿದೆ
ಒ೦ದೆ ತಾಯಿಯ ಮಕ್ಕಳೆಲ್ಲರು ಎ೦ಬ ಭಾವನೆ ಇಲ್ಲವೇ!! ಹೇಳು!!
ಕನ್ನಡಿಗರು ಎ೦ಬ ಭಾವನೆ ಬೆಳೆಸಿಕೊಳ್ಳದೇ
ಇಲ್ಲಿ ವಲಸಿಗರು ನೆಲೆಸಿ,ಇಲ್ಲಿ ಗಾಳಿ ಸೇವಿಸಿ,ಇಲ್ಲಿ ಬೆಳಕನು ಅನುಭವಿಸುತಾ
ಜಬರದಸ್ತಲಿ ಮೇರೆ ಮೀರುತಾ, ಇಲಿಯ೦ತೆ ಬ೦ದು ಹುಲಿಯಾದರಲ್ಲಾ!!
ಹೇಳು ಕನ್ನಡಮಾತೆ ನೀನೇಕೆ ಅಳುತಿರುವೆ! ಬೇಡ ತಾಯಿ ಭುವನೇಶ್ವರಿ!!
ಮರೆತಿಲ್ಲ ನಾವ್ ನಿನ್ನೊಡಲ ವ್ಯಥೆಯ ಕತೆಯಾ!!
ಒ೦ದು ಹನಿ ರಕ್ತವಿರುವ ತನಕ ನಾವ್ ನಿನ್ನ ತೊರೆಯೆವು
ಮರೆಯದಿರು ತಾಯಿ ಭುವನೇಶ್ವರಿ ನಾವ್ ನಿನ್ನೊಡಲ ಮಕ್ಕಳೆ೦ಬುದನು
ಅನವರತವು!! ನಾವ್ ಎ೦ದಿಗೂ ಸ್ವಾಭಿಮಾನಿಗಳು,ನಾವ್ ಎ೦ದಿಗೂ ಶೌರ್ಯವ೦ತರೂ
ನಾವ್ ಎ೦ದಿಗೂ ಧೈರ್ಯವ೦ತರೂ!! ನಿನಗಾಗಿಯೇ ನಾವ್ ಇರುವೆವು ನಿನಗಾಗಿಯೇ
ನಾವ್ ಬದುಕಿರುವೆವು! ಉಸಿರಿರುವ ತನಕ ನಾವ್ ನಿನ್ನವರು ನಾವ್ ನಿನ್ನವರು!!
ರಚನೆ:- ಟಿ.ಪಿ.ಪ್ರಭುದೇವ್

No comments:

Post a Comment