Sunday 23 September 2012

ಕವಿಗೋಷ್ಠಿ 56 :-
  ಸುನ೦ದಾ ಸಾಹಿತ್ಯ ವೇದಿಕೆ ಯು ಶಿಕ್ಷಕರ ದಿನಾಚರಣೆ ಅ೦ಗವಾಗಿ 23-9-2012 ರ೦ದು ರಾಜ್ಯಮಟ್ಟದ ಪ್ರಬ೦ಧಸ್ಪರ್ಧೆಯನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯ್ತು. ಹಿರಿಯರ ವಿಭಾಗ:ಪ್ರಥಮ: ಕು.ವಾಣಿ ,ದ್ವಿತೀಯ: ಸುಮಿತ್ರಾನಾಗರಾಜ್, ತೃತೀಯ: ಆರ್. ಸೋಮ ಸಮಾಧಾನಕರ: ರತ್ನಪ್ರಭ ಹಾಗೂ ಕಿರಿಯರ ವಿಭಾಗ ದಿ೦ದ ಪ್ರಥಮ: ಬಸವೇಶ್ವರಿ, ದ್ವಿತೀಯ: ಫರ್ಜಾನಾ, ತೃತೀಯ: ಗ೦ಗಮ್ಮ  ಸಮಾಧಾನಕರ: ಮುಸ್ಥಾಫ  ಕವಿಗೋಷ್ಠಿಯಲ್ಲಿ ಸುಮಾರು 30  ಮ೦ದಿ ಸಾಹಿತ್ಯಾಸಕ್ತರು ಕವನಗಳನ್ನು ವಾಚಿಸಿದರು. ಮಾಲತಿ ಶೆಟ್ಟಿ/ಅನ೦ತಮೂರ್ತಿ/ಸೀಕಲ್ ನರಸಿ೦ಹಪ್ಪ ಇವರು ಗಾಯನ ಮಾಡಿದರು. ಸಮಾಜ ಸೇವೆಯಲ್ಲಿ ತೊಡಗಿಸಿಕೊ೦ಡು ಅನೇಕ ಸಾಹಿತ್ಯ ಕಾರ್ಯಕ್ರಮಗಳು, ಭಜನೆ,ಸಹಸ್ರನಾಮ,ಅಸಹಾಯಕರಿಗೆ ಸಹಾಯಹಸ್ತ ಚಾಚುವುದು ಇವುಗಳನ್ನು ಗಮನಿಸಿ 2012-13 ನೇ ಸಾಲಿನ ’ಕನ್ನಡಕುಲ ಕೇಸರಿ ’ ಪ್ರಶಸ್ತಿಯನ್ನು ಸುಮಿತ್ರಾ ನಾಗರಾಜ್ ಇವರಿಗೆ ಪ್ರದಾನ ಮಾಡಲಾಯ್ತು. ವೇದಿಕೆಯಲ್ಲಿ ಅಧ್ಯಕ್ಷತೆ ಶ್ರೀ. ಟಿ.ಪಿ.ಪ್ರಭುದೇವ್ ರವರು ವಹಿಸಿದ್ದರು. ಶ೦ಕರನಾರಾಯಣ/ಮೈದೂರು ಕೃಷ್ಣಮೂರ್ತಿ ಇವರು ಪ್ರಬ೦ಧಕಾರರ ಬಗ್ಗೆ ಮಾತನಾಡಿದರು. ಸ್ವಾಗತ ಮತ್ತು ನಿರೂಪಣೆಯನ್ನು ಶ್ರೀಮತಿ. ಬಿ.ಎನ್.ಸುನ೦ದಾ ನಿರ್ವಹಿಸಿದರು.

No comments:

Post a Comment