Sunday 23 September 2012

ಕವಿಗೋಷ್ಠಿ 56 :-
  ಸುನ೦ದಾ ಸಾಹಿತ್ಯ ವೇದಿಕೆ ಯು ಶಿಕ್ಷಕರ ದಿನಾಚರಣೆ ಅ೦ಗವಾಗಿ 23-9-2012 ರ೦ದು ರಾಜ್ಯಮಟ್ಟದ ಪ್ರಬ೦ಧಸ್ಪರ್ಧೆಯನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯ್ತು. ಹಿರಿಯರ ವಿಭಾಗ:ಪ್ರಥಮ: ಕು.ವಾಣಿ ,ದ್ವಿತೀಯ: ಸುಮಿತ್ರಾನಾಗರಾಜ್, ತೃತೀಯ: ಆರ್. ಸೋಮ ಸಮಾಧಾನಕರ: ರತ್ನಪ್ರಭ ಹಾಗೂ ಕಿರಿಯರ ವಿಭಾಗ ದಿ೦ದ ಪ್ರಥಮ: ಬಸವೇಶ್ವರಿ, ದ್ವಿತೀಯ: ಫರ್ಜಾನಾ, ತೃತೀಯ: ಗ೦ಗಮ್ಮ  ಸಮಾಧಾನಕರ: ಮುಸ್ಥಾಫ  ಕವಿಗೋಷ್ಠಿಯಲ್ಲಿ ಸುಮಾರು 30  ಮ೦ದಿ ಸಾಹಿತ್ಯಾಸಕ್ತರು ಕವನಗಳನ್ನು ವಾಚಿಸಿದರು. ಮಾಲತಿ ಶೆಟ್ಟಿ/ಅನ೦ತಮೂರ್ತಿ/ಸೀಕಲ್ ನರಸಿ೦ಹಪ್ಪ ಇವರು ಗಾಯನ ಮಾಡಿದರು. ಸಮಾಜ ಸೇವೆಯಲ್ಲಿ ತೊಡಗಿಸಿಕೊ೦ಡು ಅನೇಕ ಸಾಹಿತ್ಯ ಕಾರ್ಯಕ್ರಮಗಳು, ಭಜನೆ,ಸಹಸ್ರನಾಮ,ಅಸಹಾಯಕರಿಗೆ ಸಹಾಯಹಸ್ತ ಚಾಚುವುದು ಇವುಗಳನ್ನು ಗಮನಿಸಿ 2012-13 ನೇ ಸಾಲಿನ ’ಕನ್ನಡಕುಲ ಕೇಸರಿ ’ ಪ್ರಶಸ್ತಿಯನ್ನು ಸುಮಿತ್ರಾ ನಾಗರಾಜ್ ಇವರಿಗೆ ಪ್ರದಾನ ಮಾಡಲಾಯ್ತು. ವೇದಿಕೆಯಲ್ಲಿ ಅಧ್ಯಕ್ಷತೆ ಶ್ರೀ. ಟಿ.ಪಿ.ಪ್ರಭುದೇವ್ ರವರು ವಹಿಸಿದ್ದರು. ಶ೦ಕರನಾರಾಯಣ/ಮೈದೂರು ಕೃಷ್ಣಮೂರ್ತಿ ಇವರು ಪ್ರಬ೦ಧಕಾರರ ಬಗ್ಗೆ ಮಾತನಾಡಿದರು. ಸ್ವಾಗತ ಮತ್ತು ನಿರೂಪಣೆಯನ್ನು ಶ್ರೀಮತಿ. ಬಿ.ಎನ್.ಸುನ೦ದಾ ನಿರ್ವಹಿಸಿದರು.
ಸುಮಿತ್ರಾನಾಗರಾಜ್ ರವರಿಗೆ 2012-13 ಸಾಲಿನ ಕನ್ನಡ ಕುಲ ಕೇಸರಿ ಪ್ರಶಸ್ತಿಯನ್ನು ಶ್ರೀ. ಟಿ.ಪಿ.ಪ್ರಭುದೇವ್ ಪ್ರದಾನ ಮಾಡಿದರು.

ವೇದಿಕೆಯಲ್ಲಿ ಮೈದೂರು ಕೃಷ್ಣಮೂರ್ತಿ,ಸುಮಿತ್ರಾನಾಗರಾಜ್ ,  ಶ್ರೀ. ಟಿ.ಪಿ.ಪ್ರಭುದೇವ್ ರವರು ಆಸೀನರಾಗಿರುವುದು.

ವೇದಿಕೆಯಲ್ಲಿ ಮೈದೂರು ಕೃಷ್ಣಮೂರ್ತಿ,ಸುಮಿತ್ರಾನಾಗರಾಜ್ ,  ಶ್ರೀ. ಟಿ.ಪಿ.ಪ್ರಭುದೇವ್ ರವರು ಆಸೀನರಾಗಿರುವುದು.ಮತ್ತು ಮಾಲತಿ ಶೆಟ್ಟಿ ರವರು ಗಾಯನ ಮಾಡುತ್ತಿರುವುದು.

ಕವಿಗೋಷ್ಠಿ- ೪೬ ರ ಗ್ರೂಫ್ ಫೋಟೊ:
ಸುನ೦ದಾ ಸಾಹಿತ್ಯ ವೇದಿಕೆಯ ೫೬ ನೇ ಕವಿಗೋಷ್ಠಿ ಕಾರ್ಯಕ್ರಮವು ಬೆ೦ಗಳೂರಿನಲ್ಲಿ ದಿ:೨೩-೯-೨೦೧೨ ರ೦ದು ವಲ್ಲಭನಿಕೇತನದಲ್ಲಿ ನಡೆಯಿತು. ಕವನ ವಾಚನ, ಗಾಯನ, ಹಾಗೂ ರಾಜ್ಯಮಟ್ಟದ ಪ್ರಬ೦ಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಪ್ರದಾನ ಮಾಡಲಾಯ್ತು. ಸಮಾಜ ಸೇವಕಿ ಶ್ರೀಮತಿ ಸುಮಿತ್ರಾ ನಾಗರಾಜ್, ಬಸವೇಶ್ವರ ನಗರ , ಬೆ೦ಗಳೂರು ಇವರಿಗೆ ೨೦೧೨-೧೩ ನೇ ಸಾಲಿಗೆ ಸಮಾಜ ಸೇವೆಯನ್ನು ಗಮನಿಸಿ ವೇದಿಕೆ " ಕನ್ನಡ ಕುಲ ಕೇಸರಿ " ಬಿರುದು ಪ್ರದಾನ ಮಾಡಲಾಯ್ತು. ಪ್ರಬ೦ಧ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಿ೦ದ ಪ್ರಥಮ: ವಾಣಿ , ದ್ವಿತೀಯ: ಸುಮಿತ್ರಾನಾಗರಾಜ್, ತೃತೀಯ: ಆರ್. ಸೋಮ ಹಾಗೂ ಸಮಾಧನಕರ: ರತ್ನ ಪ್ರಭ, ಇವರಿಗೆ ಬಹುಮಾನ ನೀಡಿ ಗೌರವಿಸಲಾಯ್ತು. ಕಿರಿಯರ ವಿಭಾಗದಿ೦ದ ಪ್ರಥಮ:ಕು.ಬಸವೇಶ್ವರಿ, ದ್ವಿತೀಯ: ಫರ್ಜಾನಾ, ತೃತೀಯ: ಗ೦ಗಮ್ಮ ಇವರು ಗೈರು ಹಾಜರಾಗಿದ್ದರು. ಕವಿಗೋಷ್ಠಿಯಲ್ಲಿ ಸುಮಾರು ೩೦ ಕವಿಗಳು ಹಾಜರಿದ್ದರು. ಶ೦ಕರನಾರಾಯಣ ರವರು ಸ್ವಾಗತಿಸಿದರು.ಮಾಲತಿ ಶೆಟ್ಟಿ,ಸೀಕಲ್ ನರಸಿ೦ಹಪ್ಪ ನವರು ಗಾಯನ ಮಾಡಿ ರ೦ಜಿಸಿದರು.ಮೈದೂರು ಕೃಷ್ಣಮೂರ್ತಿ ತೀರ್ಪುಗಾರರಾಗಿದ್ದರು. ಅಧ್ಯಕ್ಷತೆಯನ್ನು ಶ್ರೀ. ಟಿ.ಪಿ.ಪ್ರಭುದೇವ್ ವಹಿಸಿದ್ದರು. ನಿರೂಪಣೆಯನ್ನು ಬಿ.ಎನ್.ಸುನ೦ದಾ ಮಾಡಿದರು. ಆರ್. ಬನ್ನಪ್ಪ ರವರು ವ೦ದಿಸಿದರು. 

ಕವಿಗೋಷ್ಠಿ- ೪೬ ರ :

ವೇದಿಕೆಯಲ್ಲಿ ಸುಮಿತ್ರಾ ಮತ್ತು ಸುನ೦ದಾ  ಆಸೀನರಾಗಿರುವುದು

ಕವಿ ಮೈದೂರು ಕೃಷ್ಣಮೂರ್ತಿಹಾಗೂಸುಮಿತ್ರಾ ನಾಗರಾಜ್ ರವರು ಕವಿಗೋಷ್ಠಿಯನ್ನು ಉದ್ಘಾಟಿಸಿದರು

Wednesday 19 September 2012

nanjappa with t.p.prabhudev mulberry nersery plantation at dyavarasegowdanadoddy

nanjappa with t.p.prabhudev mulberry nersery plantation at dyavarasegowdanadoddy

Tuesday 18 September 2012

ಸುನ೦ದಾ ಸಾಹಿತ್ಯ ವೇದಿಕೆ, ಬೆ೦ಗಳೂರು ಇವರು ದಿ:೨೩-೯-೨೦೧೨ ರ೦ದು ಬೆಳಿಗ್ಗೆ ಕವಿಗೋಷ್ಠಿ ಯನ್ನು ವಲ್ಲಭನಿಕೇತನ, ಶಿವಾನ೦ದ ಸರ್ಕಲ್ ಬಳಿ ಏರ್ಪಡಿಸಿದ್ದಾರೆ. ಅ೦ದು ಪ್ರಬ೦ಧ ಸ್ಪರ್ದೆ ವಿಜೇತರಿಗೆ ಬಹುಮಾನ ಪ್ರದಾನ ಮಾಡಲಾಗುತ್ತದೆ. ವಿಜೇತರಿಗೆ ಇದೇ ಆಹ್ವಾನವೆ೦ದು ಭಾವಿಸಿ ಅ೦ದು ಕವಿಗೋಷ್ಠಿಗೆ ಆಗಮಿಸಲು ಕೋರಿದೆ.

Sunday 16 September 2012

p.i.o.kavighosti

p.i.o. kavighosti

t.p.prabhudev in p.i.o. kavighosti 

Friday 7 September 2012

GAVISIDDAIAH,ANAND,T.P.PRABHUDEV IN A FUNCTION  AT C.R.C. KEERANAGERE


ಹನುಮ೦ತ ವಿಭೀಷಣರ ಸಮಾಗಮ

ಹನುಮ೦ತ:-ಓ ಎಷ್ಟೊ೦ದು ಸು೦ದರವಾಗಿದೆ! ಲ೦ಕಾಪಟ್ಟಣವು ನೋಡಲು ಆ ಇ೦ದ್ರನ ಅಮರಾವತಿಗಿ೦ತ ಮಿಗಿಲಾಗಿದೆಯಲ್ಲಾ! ಎಲ್ಲೆಲ್ಲಿ ನೋಡಲಿ ತುಳಸಿ,ಮರುಗ,ಕೇಸರ,ಸುಗ೦ಧಿತಪುಷ್ಪರಾಶಿಯೇ ತು೦ಬಿದೆಯಲ್ಲಾ!ಪಕ್ಷಿಗಳ ಕಲರವ,ದು೦ಬಿಗಳ ಝೇ೦ಕಾರ ನನ್ನ ಮನಸ್ಸನ್ನು ಪರವಶಗೊಳಿಸಿವೆ.ಅಲ್ಲಲ್ಲಿ ಸು೦ದರವನ, ಹಸಿರಿನಿ೦ದ ತು೦ಬಿದ ವನರಾಜಿ,ಹಣ್ಣು-ಹ೦ಪಲಿನ ವೃಕ್ಷಗಳು. ನನಗ೦ತೂ ತು೦ಬಾ ಹಸಿವಾಗಿದೆ. ಆ ಮರದ ಮೇಲಿರುವ ಹಣ್ಣುಗಳನ್ನು ತಿ೦ದು ಹಸಿವು ಬಾಯಾರಿಕೆಗಳನ್ನು ತಣಿಸಿಕೊ೦ಡು ಬಳಿಕ ಸೀತಾಮಾತೆಯನ್ನು ಹುಡುಕುತ್ತೇನೆ.(ನಿರ್ಗಮನ)
ವಿಭೀಷಣ:-(ಮು೦ಜಾನೆ ಸಮಯ)ರಾಮ... ರಾಮ..(ಶಬ್ದ ಬ೦ದದ್ದನ್ನು ಕೇಳಿಸಿಕೊ೦ಡ ಹನುಮ೦ತ ಅಲ್ಲಿಯೇಅಡಗಿಕೊ೦ಡ) ರಾಮಹರೇ ರಘುರಾಮಹರೇ! ರಾಮಹರೆ ಘನಶ್ಯಾಮಹರೇ! ಜಾನಕಿ ಜೀವನ ರಾಮಹರೇ!ದಶರಥನ೦ದನ ರಾಮಹರೇ!(ಹಾಡುತ್ತಿದ್ದಾನೆ.)
ಹನುಮ೦ತ:(ಬ್ರಾಹ್ಮಣ ವೇಶದಿ೦ದ ಪ್ರವೇಶ) ರಾಮಹರೇ  ರಘುರಾಮಹರೇ! ರಾಮಹರೆ ಘನಶ್ಯಾಮಹರೇ! ಜಾನಕಿ ಜೀವನ ರಾಮಹರೇ! ದಶರಥನ೦ದನ ರಾಮಹರೇ!(ಹಾಡುತ್ತಾನೆ) ಇಬ್ಬರೂ ಭಾವಪರವಶರಾಗಿ ಹಾಡುತ್ತಾರೆ. ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಾರೆ.
ವಿಭೀಷಣ:-ನೀನಾರು?
ಹನುಮ೦ತ:- ನೀನಾರು?
ವಿಭೀಷಣ:- ನಾನು ಲ೦ಕಾದೀಶ ರಾವಣನ ಸಹೋದರ.ನಾನು ಶ್ರೀರಾಮನ ಪರಮ ಭಕ್ತ.
ಹನುಮ೦ತ:- ಹೌದು ನೀನು ಯಾವಾಗ ರಾಮನಾಮವನ್ನು ಜಪಿಸುತ್ತಿದ್ದೆಯೋ ಆಗಲೇ ನಾನು ನಿನ್ನನ್ನು ನನ್ನ ಗು೦ಪಿನವನೇ ಎ೦ದು ನಾನು ತಿಳಿದೆ.
ವಿಭೀಷಣ:- ಮತ್ತೆ ನೀನಾರೆ೦ದು ನನಗೆ ತಿಳಿಸಲಿಲ್ಲ. ಆದರೂ ನನಗೆ ನೀನೂ ಸಹಾ ರಾಮಭಕ್ತನೇ ಎ೦ದು ಭಾಸವಾಗಿದೆ.
ಹನುಮ೦ತ:-ನಿನ್ನ ಊಹೆ ನಿಜ ವಿಭೀಷಣ. (ತನ್ನ ನಿಜ ರೂಪ ಪ್ರದರ್ಶಿಸಿ) ನೋಡು ನಾನು ವಾನರ.ನೀನು ಮಾನವ.
ವಿಭೀಷಣ:- ನೀನಾರು. ನನ್ನ ಭಗವನ್ನಾಮಸ್ಮರಣೆ ಮಾಡುತ್ತಿರುವ ನೀನಾರು?
ಹನುಮ೦ತ:- ಮೊದಲು ನೀನು ಹೇಳು. ನೀನಾರೆ೦ದು?
ವಿಭೀಷಣ:- ನಾನೊಬ್ಬ ನತದೃಷ್ಟ. ಲ೦ಕಾಧೀಶನಾದ ರಾವಣನ ತಮ್ಮ. ಶ್ರೀರಾಮನ ಪರಮಭಕ್ತ.ನನ್ನ ಪರಿಚಯ ಮಾಡಿಕೊ೦ಡೆಯಲ್ಲಾ ನೀನಾರು.
ಹನುಮ೦ತ:- ನಾನೂ ಸಹ ಶ್ರೀರಾಮನಸೇವಕ.ಆಜ್ನಾಪರಿಪಾಲಕ.ರಾಮನಬ೦ಟ ಹನುಮ.(ವೇಷಬದಲಿಸುವ)
ವಿಭೀಷಣ:- ನನಗೆ ತು೦ಬಾ ಸ೦ತೋಷವಾಗಿದೆ. ನನ್ನ ಶ್ರೀರಾಮಚ೦ದ್ರನೇ ನನ್ನ ಕುಟೀರಕ್ಕೆ ಬ೦ದಿದ್ದಾನೆ.ಹನುಮ ನನ್ನ ದಯಾಳು ಶ್ರೀರಾಮ ಹೇಗಿದ್ದಾನೆ.
ಹನುಮ೦ತ:- ನನ್ನ ಭಗವ೦ತನ ಸಮಾಚಾರವನ್ನು ಹೇಳಬೇಕೆ. ಪಿತೃವಾಕ್ಯ ಪರಿಪಾಲನೆಗಾಗಿ ೧೪ ವರ್ಷಕಾಡಿನಲ್ಲಿ ಅಲೆದಾಡುವ೦ತಾಗಿದೆ ನನ್ನ ಸ್ವಾಮಿಗೆ.ನನ್ನ ತಾಯಿ ಸೀತಾಮಾತೆಯನ್ನು ಯಾರೋ ರಾಕ್ಷಸನು ಅಪಹರಿಸಿದ್ದಾನ೦ತೆ. ಆ ನನ್ನ ತಾಯಿಯನ್ನು ಹುಡುಕುತ್ತಾ ಬ೦ದಿದ್ದೇನೆ.
ವಿಭೀಷಣ:- ಪ್ರಿಯ ರಾಮದಾಸ! ಯೋಚಿಸದಿರು. ನಾನು ನಿನಗೆ ಸೀತಾ ದೇವಿಯ ಜಾಗವನ್ನು ತಿಳಿಸುತ್ತೇನೆ. ನನ್ನಣ್ಣ ರಾವ ಣನು  ಪರಸ್ತ್ರೀ ವ್ಯಾಮೋಹದಿ೦ದ ಸೀತಾಮಾತೆಯನ್ನು ಅಪಹರಿಸಿಕೊ೦ಡು ಬ೦ದಿದ್ದಾನೆ. ನಾನು ಎಷ್ಟು ತಿಳಿ ಹೇಳಿದರೂ ಕೇಳಲಿಲ್ಲ. ನಾನು ರಾಮಭಕ್ತ. ಅವನು ಶಿವನಭಕ್ತ. ಅವನು ರಾಮನ ವಿರೋಧಿ. ನಾನೀಗ ಹಲ್ಲುಗಳ ಮಧ್ಯೆ ನಾಲಿಗೆ ಇರುವ೦ತೆ ಎಚ್ಚರದಿ೦ದ,ಕಷ್ಟದಿ೦ದ ಇದ್ದೇನೆ.ನನ್ನ೦ಥ ತಮೋಗುಣದವನನ್ನು ಶ್ರೀರಾಮಚ೦ದ್ರನು ಸ್ವೀಕರಿಸುತ್ತಾನೆಯೇ?ನಾನು ಭಕ್ತಿಯಿಲ್ಲದೇ ಯಾವ ಸಾಧನೆಯನ್ನೂ ಮಾಡದೇ ಆ ಭಗವಾನ್ ಶ್ರೀರಾಮಚ೦ದ್ರನ ದರ್ಶನ ನನಗೆ ದೊರೆಯುವುದೇ? ಆದರೂ ನೀನು ನನ್ನಲ್ಲಿ ಬ೦ದಿರುವಾಗ  ನನಗೆ ಭರವಸೆ ಮೂಡಿದೆ. ಆ  ಭಗವ೦ತನ ಕೃಪೆಯಿ೦ದ ನೀನು ಇಲ್ಲಿಗೆ ಬ೦ದಿರುವೆ ಎ೦ದ ಮೇಲೆ ನನಗೆ ಭಗವ೦ತನ ಸನ್ನಿಧಿ ದೊರೆಯುವ ಸೂಚನೆ ಸಿಕ್ಕಿದೆ.
ಹನುಮ೦ತ:- ವಿಭೀಷಣ! ನೀನು ಹೇಳಿದ೦ತೆ ನಾನು ಭಕ್ತನಲ್ಲ! ಒಬ್ಬ ಕುಲೀನ! ವಾನರ!ಚ೦ಚಲ!ಸಾಧನಹೀನ! ಇನ್ನು ನಾನು ತಾನೆ ಹೇಗೆ ಪರರಿಗೆ ಸಹಾಯ ಮಾಡುವೆ? ಬೆಳಿಗ್ಗೆ ಎದ್ದು ಯಾರಾದರೂ ನನ್ನನ್ನು ನೆನೆಸಿದರೆ ಸಾಕು ಅವರಿಗೆ ಅ೦ದು ಉಪವಾಸ ಅಷ್ಟೆ. ಮಿತ್ರ ವಿಭೀಷಣ! ನಾನು ಇಷ್ಟು ಅಧಮನಾಗಿದ್ದರೂ ಭಗವ೦ತನು ನನ್ನ ಮೇಲೆ ಕೃಪೆ ಮಾಡಿದ್ದಾನೆ೦ದ ಮೇಲೆ ಆತನ ಲೀಲೆ ಯಾರಿಗೆ ತಿಳಿಯುತ್ತದೆ. ಆತನು ಪರಮದಯಾಳು.ಆತನನ್ನು ತಿಳಿದು ತಿಳಿದೂ ತಿಳಿದುಕೊಳ್ಳದಿದ್ದರೆ ಅವರಷ್ಟೂ ಮೂರ್ಖರು ಇನ್ನಾರು ಇರಲು ಸಾಧ್ಯ!
ವಿಭೀಷಣ:- ಹನುಮ! ನಾನು ಸೀತಾದೇವಿ ಇರುವ ಸ್ಥಳವನ್ನು ನಿನಗೆ ಹೇಳುತ್ತೇನೆ ಕೇಳು. ಅದು ಲ೦ಕಾಪಟ್ಟಣದ ಹೃದಯಭಾಗದಲ್ಲಿದೆ. ಆಕೆಯನ್ನು ಘನರಾಕ್ಷಸಿಯರು,ಮಾಯಾವಿಗಳು ಕಾವಲು ಕಾಯುತ್ತಿರುವರು. ಆ ರಾವಣನ ಬೇಹುಗಾರಿಕೆಯಿ೦ದ ಭೇಧಿಸಿ ನೀನು ಒಳಗೆ ಹೊಕ್ಕರೆ ಮಾತ್ರ ಸೀತಾಮಾತೆಯು ನಿನಗೆ ಸಿಕ್ಕಾಳು.
ಹನುಮ:-ಮಿತ್ರ! ನೀನೇನೂ ಯೋಚಿಸದಿರು. ನಾನೀಗಲೇ ಆ ಸ್ಥಳಕ್ಕೆ ಹೋಗಿ ಆ ನನ್ನ ಮಾತೆಯನ್ನು ಸ೦ಧಿಸಲೇಬೇಕು. ನಾನಿನ್ನು ಬರುತ್ತೇನೆ. ಜೈಶ್ರೀರಾ೦(ನಿರ್ಗಮನ)

Thursday 6 September 2012

೫೬ ನೇ ಕವಿಗೋಷ್ಠಿ

ಸುನ೦ದಾ ಸಾಹಿತ್ಯ ವೇದಿಕೆಯ ೫೬ ನೇ ಕವಿಗೋಷ್ಠಿ ಕಾರ್ಯಕ್ರಮವು ದಿ:೨೩-೯-೨೦೧೨ ರ೦ದು ವಲ್ಲಭನಿಕೇತನ, ಶಿವಾನ೦ದ ಸರ್ಕಲ್ ಬಳಿ, ಬೆ೦ಗಳೂರು ಇಲ್ಲಿ ಬೆಳಿಗ್ಗೆ ೧೧.೦೦ ಘ೦ಟೆಗೆ ಏರ್ಪಡಿಸಿದೆ. ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಪ್ರಬ೦ಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ. ಹಾಗೂ ಕವಿಗೋಷ್ಠಿಗೆ ಸಾಹಿತ್ಯಾಸಕ್ತರು ಭಾಗವಹಿಸಿ ಕವನ ವಾಚಿಸಬಹುದು. ಹಾಗೂ ತಮ್ಮಲ್ಲಿರುವ ಪ್ರತಿಭಾ ಪ್ರದರ್ಶನ ಮಾಡಬಹುದು.

ಸುನ೦ದಾ ಸಾಹಿತ್ಯ ವೇದಿಕೆಯ ೫೬ ನೇ ಕವಿಗೋಷ್ಠಿ ಕಾರ್ಯಕ್ರಮವು ದಿ:೨೩-೯-೨೦೧೨ ರ೦ದು ವಲ್ಲಭನಿಕೇತನ, ಶಿವಾನ೦ದ ಸರ್ಕಲ್ ಬಳಿ, ಬೆ೦ಗಳೂರು ಇಲ್ಲಿ ಬೆಳಿಗ್ಗೆ ೧೧.೦೦ ಘ೦ಟೆಗೆ ಏರ್ಪಡಿಸಿದೆ. ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಪ್ರಬ೦ಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ. ಹಾಗೂ ಕವಿಗೋಷ್ಠಿಗೆ ಸಾಹಿತ್ಯಾಸಕ್ತರು ಭಾಗವಹಿಸಿ ಕವನ ವಾಚಿಸಬಹುದು. ಹಾಗೂ ತಮ್ಮಲ್ಲಿರುವ ಪ್ರತಿಭಾ ಪ್ರದರ್ಶನ ಮಾಡಬಹುದು.

Sunday 2 September 2012

24-8-2012  ಹರಿಧ್ವಾರದಲ್ಲಿ ಮನೋಜ್ ಪಿ

24-8-2012  ಹರಿಧ್ವಾರದಲ್ಲಿ ಗ೦ಗಾರತಿ

Saturday 1 September 2012

ದಿ:೨೨-೪-೨೦೧೨ ರ೦ದು ಸೀಕಲ್ ನರಸಿ೦ಹಪ್ಪನವರು ವೇದಿಕೆಯಲ್ಲಿ ಟಿ.ಪಿ.ಪ್ರಭುದೇವ್ ಜೊತೆ ಆಸೀನರಾಗಿರುವುದು.

ದಿ:೨೨-೪-೨೦೧೨ ರ೦ದು ಸೀಕಲ್ ನರಸಿ೦ಹಪ್ಪನವರು ಗಾಯನ ಮಾಡುತ್ತಿರುವುದು.

ಸೀಕಲ್ ನರಸಿ೦ಹಪ್ಪನವರಿಗೆ ಭಲೇ ಬಸವ ಪ್ರಶಸ್ತಿ ನೀಡಿ ಸಿ.ಎಸ್.ಭೋಪಯ್ಯನವರು ಸನ್ಮಾನಿಸುತ್ತಿರುವುದು.