ಅಂಧಕಾರ ತುಂಬಿದ ಈ ಜಗದೊಳಗೆ
ಅಂಧಕಾರ ತುಂಬಿದ ಈ ಜಗದೊಳಗೆ ಅನ್ಯಾಯವೆ
ತುಂಬಿದ
ಈ ಲೋಕದೊಳಗೆ ಹೇಗೆ ಬಾಳಲಿ ದೇವಾ||
ಎತ್ತ ನೋಡಿದರೂ ಕಳ್ಳಕಾಕರು, ಸುತ್ತ ಹುಡುಕಿದರೂ ಪುಂಡಪೋಕರು
ಕಿತ್ತು ತಿನ್ನುತಿಹರು ರಣಹದ್ದಿನಂತೆ ಶಾಂತಿ
ಎಲ್ಲಿದೇ ದೇವಾ|
ಎಂದಿಗೇ ನಲಿವು ಸಿಗುವುದೋ,ಯಾವಾಗ ಮುಕ್ಕಣ್ಣ ತೆರೆವನೋ||
ಜಗಪತಿ ನೀನು,ಮೂಜಗಪತಿ ನೀನು
ಶಾಂತಿಸುಖದ ಸೆಲೆಯೂ ನೀನು|
ಎಂದಿಗೆ ನಿನ್ನ ದರ್ಶನ,ನಿನಗಿದೂ ನನ್ನ ಶಿರಸಾನಮನ||
ಮನಸಲ್ಲಿ ನೀನು ನೆಲೆಸು ಬೇಗ
ಕಳೆಯೋ ನಮ್ಮ ಮೌಢ್ಯಾತ್ಮಸಾರ
ನಮಿಸುವೆ ನಿನಗೆ ಹೇ ದಯಾಮಯ,ದಯೆತೋರೋ ಪರಮೇಶ್ವರ||
No comments:
Post a Comment