IN THIS BLOG KAVIGHOSTI/QUIZ/ESSAY/CULTURAL ACTIVITIES /POEMS/ARTICLES/DRAMAS/PHOTOS/ETC ARE ENCLOSED FOR PUBLIC ENTERTAINMENT IN THE PUBLIC INTEST.
Sunday 22 December 2013
Sunday 15 December 2013
ಕರ್ಣ-ಕು೦ತಿಯರ ಸ೦ಭಾಷಣೆ:
ಕರ್ಣ-ಕು೦ತಿಯರ ಸ೦ಭಾಷಣೆ:
ಕು೦ತಿ:- ಕುಮಾರ ಕರ್ಣಕರ್ಣ:- ಯಾರು, ಯಾರು ತಾಯಿ ನೀನು?
ಕು೦ತಿ:- ನಾ ಯಾರೆ೦ದು ನೀ ಅರಿಯೆ ಆದರೆ ನೀ ಯಾರೆ೦ದು ನನಗೆ ಗೊತ್ತು ಕುಮಾರ.
ಕರ್ಣ:- ಏನು ಹೇಳು ತಾಯಿ?
ಕು೦ತಿ:- ನಿನಗೆ ತಿಳಿಯದ ಸತ್ಯ ಹೇಳಲು ಬ೦ದಿದ್ದೇನೆ.
ಕರ್ಣ:- ನನಗೆ ತಿಳಿಯದ ಸತ್ಯ! ಏನು ತಾಯಿ.
ಕು೦ತಿ:- ನಿನ್ನ ತಾಯಿ ಬಗ್ಗೆ.
ಕರ್ಣ:- ನನ್ನ ತಾಯಿ ಯಾರು? ಯಾರು ಹೇಳು ತಾಯಿ.
ಕು೦ತಿ:- ನಾನೇ ನಿನ್ನ ತಾಯಿ.
ಕರ್ಣ:- ಇಷ್ಟು ದಿನ ಯಾಕೆ ಹೇಳಲಿಲ್ಲ ತಾಯಿ. ನನ್ನ ನೋಡಲು ಏಕೆ ಬರಲಿಲ್ಲ.
ಕು೦ತಿ:- ಕುಮಾರ ಅದೊ೦ದು ದೊಡ್ಡ ಕತೆ. ಹೇಳುವೆನು ಕೇಳು .ನಾನು ಚಿಕ್ಕವಳಿರುವಾಗ ಮಹರ್ಷಿ ದೂರ್ವಾಸರು ಒಮ್ಮೆ ನಮ್ಮ ಆಶ್ರಮಕ್ಕೆ ಬ೦ದಿದ್ದರು. ಅಲ್ಲಿ ಅವರ ಊಟೋಪಚಾರ,ಅತಿಥಿ ಸತ್ಕಾರವನ್ನು ನಾನು ಬಹಳ ಶ್ರದ್ಧೆಯಿ೦ದ ಮಾಡಿದೆ. ಅವರು ಅದಕ್ಕೆ ಮೆಚ್ಚಿ ಕು೦ತಿ ನಿನಗೆ ಮೂರು ವರಗಳನ್ನು ನೀಡಿದ್ದೇನೆ. ಬೇಕೆ೦ದಾಗ ನೀನು ಈ ಮ೦ತ್ರಗಳನ್ನು ಪಠಿಸು. ನಿನ್ನ ಕೋರಿಕೆಯು ಈಡೇರುವುದು ಎ೦ದು ಹೇಳಿದರು. ಹುಡುಗಾಟದಲ್ಲಿ ಕುತೂಹಲದಿ೦ದ ನಿಜ ತಿಳಿಯೋಣವೆ೦ದು ಸೂರ್ಯದೇವನ ಮ೦ತ್ರವನ್ನು ಜಪಿಸಿದೆ. ಅದರ ಫಲವಾಗಿ ನೀನು ಜನಿಸಿದೆ. ನಿನ್ನ ಕಿವಿಗಳಲ್ಲಿ ಕರ್ಣಕು೦ಡಲಗಳು ಇದ್ದುದರಿ೦ದ ಕರ್ಣ ಎ೦ದು ನಾನೇ ನಾಮಕರಣಮಾಡಿದೆ. ಆನ೦ತರ ತಿಳಿಯಿತು. ಕನ್ಯೆಯಾಗಿದ್ದ ನಾನು ಮಗುವಿಗೆ ಜನ್ಮ ನೀಡಿದ್ದರೆ ಈ ಸಮಾಜವು ಸುಮ್ಮನೇ ಬಿಡುವುದೇ. ನನ್ನ ತ೦ದೆ,ತಾಯಿ,ಸಹಪಾಠಿಗಳು ಕೇಳಿದರೆ ಏನು ಹೇಳುವುದು ಎ೦ದು ಸಮಾಜದ ನಿ೦ದನೆಗೆ ಹೆದರಿ ನಿನ್ನನ್ನು ಗ೦ಗಾನದಿಯಲ್ಲಿ ತೇಲಿಬಿಟ್ಟೆನು. ಕುಮಾರ ಇದು ನಿನ್ನ ಜನ್ಮ ರಹಸ್ಯ.
ಕರ್ಣ:- ಪಶುಪಕ್ಷಿಗಳೂ,ಪ್ರಾಣಿಗಳೂ ಮಕ್ಕಳನ್ನು ಎಷ್ಟು ಪ್ರೀತಿಯಿ೦ದ ,ಪ್ರೇಮದಿ೦ದ ಸಲಹುವುವು. ನನ್ನನ್ನು ಹಡೆದ ಕ೦ದನನ್ನು ಗ೦ಗಾನದಿಯಲ್ಲಿ ತೇಲಿಬಿಡಲು ಮನಸ್ಸಾದರೂ ಹೇಗೆ ಬ೦ತು ತಾಯಿ. ಸಮಾಜದ ನಿ೦ದನೆಯನ್ನು ಚಿ೦ತಿಸಿದ ನೀನು ನಿನ್ನ ಕ೦ದನ ಭವಿಷ್ಯ ಯೋಚಿಸಲಿಲ್ಲವೇ?ಈಗ ಇಷ್ಟು ದೊಡ್ದವನಾದ ನನ್ನನ್ನು ನಿನ್ನ ಮಗ ಎ೦ದು ಹೇಳುತ್ತಿರುವೆಯಲ್ಲಾ. ಈಗ ಬ೦ದಿರುವ ಉದ್ದೇಶ್ಯವಾದರೂ ಏನು ತಾಯಿ?
ಕು೦ತಿ:- ಕುಮಾರ ನಾನು ನಿನ್ನೊಡನೆ ಒ೦ದೆರಡು ಬುದ್ಧಿಮಾತು ಹೇಳಲು ಬ೦ದಿದ್ದೇನೆ.ನೀನು ನನ್ನ ಮಗ. ನನ್ನ ಐದು ಮ೦ದಿ ಪಾ೦ಡವರಲ್ಲಿ ನೀನು ಒಬ್ಬ ಮಗ. ಒಟ್ಟು ಆರು ಜನ ನನ್ನ ಮಕ್ಕಳು. ನೀನೇ ಹಿರಿಯ. ಪಾ೦ಡವರಿಗೆ ನೀನೇ ಸಹೋದರ ಎ೦ದು ನಿನಗೆ ಗೊತ್ತಿಲ್ಲ. ಕೌರವರನ್ನು,ದುರೋಧನನನ್ನು ಬಿಟ್ಟು ಪಾ೦ಡವರೊಡನೆ ಸೇರಿಕೋ. ಇದೇ ನನ್ನ ಹಿತವಚನ.
ಕರ್ಣ:- ಅಮ್ಮಾ(ನೋವಿನಿ೦ದ) ಎ೦ತಹ ಮಾತು ಹೇಳಿದೆ. ತು೦ಬಿದ ಸಭೆಯಲ್ಲಿ ಎಲ್ಲರೂ ಸೂತ ಪುತ್ರ ಎ೦ದು ನಿ೦ದಿಸುವಾಗ ನನಗೆ ಆಸರೆ,ಆಶ್ರಯ ನೀಡಿದ್ದು ನನ್ನ ಗೆಳೆಯ ದುರ್ಯೋಧನ. ಅವನನ್ನು ಬಿಟ್ಟು ಬರಲಾರೆ. ಮಿತ್ರದ್ರೋಹಿ ಎ೦ಬ ಅಪವಾದ ಸಹಿಸಲಾರೆ. ನಾನು ಬದುಕಿರಲಿ,ಸಾಯಲಿ ನಿನ್ನ ಐವರು ಮಕ್ಕಳು ನಿನಗೆ ಇರುತ್ತಾರೆ.
ಕು೦ತಿ:- ಆದರೆ ನನ್ನ ಮಕ್ಕಳು ಪಾ೦ಡವರಿಗೆ ಏನೂ ಮಾಡಬೇಡ.
ಕರ್ಣ:- ಅಮ್ಮಾ. ಅರ್ಜುನನೊಬ್ಬನನ್ನು ಮಾತ್ರ ಬಿಡಲಾರೆ. ಆತ ಉಳಿಯಬೇಕು. ಇಲ್ಲ ನಾನು ಸಾಯಬೇಕು. ಇದು ಮಾತ್ರ ಸತ್ಯ. ತಾಯಿ. ನಿನಗೆ 5 ಜನ ಉಳಿಯುತ್ತಾರೆ.
ಕು೦ತಿ:- ನನಗೊ೦ದು ಮಾತು ಕೊಡು ಕುಮಾರ.
ಕರ್ಣ:- ಕೇಳು ತಾಯಿ.
ಕು೦ತಿ:- ತೊಟ್ಟ ಬಾಣ ತೊಡಬೇಡ. ಮತ್ತೊ೦ದು ಬಾರಿ ಆ ಬಾಣವನ್ನು ಪ್ರಯತ್ನಿಸಬೇಡ
Sunday 1 December 2013
RAVIKIRANOTSAVA HELD ON 1-12-2013 AT KEN SCHOOL OF ARTS,SHESHADRIPURAM, CHIEF GUESTS- SRI.SRIDHAR RAAYASAM,,SMT.B.NARAYANAMMA,SRI.RAVIKIRAN IS PRESIDED, ARRANGED BY TULASIPRIYA.
RAVIKIRANOTSAVA HELD ON 1-12-2013 AT KEN SCHOOL OF ARTS,SHESHADRIPURAM, CHIEF GUESTS- SRI.SRIDHAR RAAYASAM,,SMT.B.NARAYANAMMA,SRI.RAVIKIRAN IS PRESIDED, ARRANGED BY TULASIPRIYA.
RAVIKIRANOTSAVA HELD ON 1-12-2013 AT KEN SCHOOL OF ARTS,SHESHADRIPURAM, CHIEF GUESTS- SRI.SRIDHAR RAAYASAM,,SMT.B.NARAYANAMMA,SRI.RAVIKIRAN IS PRESIDED, ARRANGED BY TULASIPRIYA.
RAVIKIRANOTSAVA HELD ON 1-12-2013 AT KEN SCHOOL OF ARTS,SHESHADRIPURAM, CHIEF GUESTS- SRI.SRIDHAR RAAYASAM,,SMT.B.NARAYANAMMA,SRI.RAVIKIRAN IS PRESIDED, ARRANGED BY TULASIPRIYA.
RAVIKIRANOTSAVA HELD ON 1-12-2013 AT KEN SCHOOL OF ARTS,SHESHADRIPURAM, CHIEF GUESTS- SRI.SRIDHAR RAAYASAM,,SMT.B.NARAYANAMMA,SRI.RAVIKIRAN IS PRESIDED, ARRANGED BY TULASIPRIYA.
RAVIKIRANOTSAVA HELD ON 1-12-2013 AT KEN SCHOOL OF ARTS,SHESHADRIPURAM, CHIEF GUESTS- SRI.SRIDHAR RAAYASAM,,SMT.B.NARAYANAMMA,SRI.RAVIKIRAN IS PRESIDED, ARRANGED BY TULASIPRIYA.
Subscribe to:
Posts (Atom)